Sunday, January 23, 2011

ರಂಗನಾಯಕಿ...!

ಕಾಮಾತುರಾನಾಂ ನ ಭಯಮ್ ನ ಲಜ್ಜಾ..!
ಸಂಸ್ಕೃತ ಜ್ನಾನದಾಯಿನಿ ಕ್ಲಾಸ್ ಮಾಡುತ್ತಿದ್ದ ಸರ್ ಹತ್ತಿರ ನಮ್ಮ ಮಾವ ಇದರ ಅರ್ಥ ಕೇಳ್ಕೊಂದು ಬರಕ್ಕೆ ಹೇಳಿದಾನೆ
ಅದರ ಅರ್ಥ ಹೇಳಿಸಾರ್ ಅಂತ ಕೇಳಿದಾಗ..
ನೋಡೋ ಅದು ಹಾಗೇ ನಿಂಗೆ ಈಗ ಹೇಳಿದರೂ ಗೊತ್ತಾಗೊಲ್ಲಾ..
ಇನ್ನೂ ಅದನ್ನೆಲ್ಲಾ ಅರ್ಥ ಮಾಡ್ಕೊಳ್ಳೋ ವಯಸ್ಸಲ್ಲ ಸುಮ್ನೆ ಬೇರೆ ಏನಾದರೂ ಸಂದೇಹ ಇದ್ರೆ ಕೇಳು...
ಇದಕ್ಕೆ ಅವರಿಗೇ ಬಂದು ಉತ್ತರ ಕೇಳ್ಕೊಳ್ಳೊಕೆ ಹೇಳೂ ಅಂತ ಭಾಷಣ ಬಿಗಿದರು.


ಈಗ್ಗೇ ೬ವರ್ಷದ ಹಿಂದೆ ನಡೆದ ಘಟನೆ ಇಂದು ಇದ್ದಕ್ಕಿದ್ದಂತೆ ನೆನಪಾಯಿತು..
ಅಂದು ಕೇಳಿ ಮರೆತು ಬಿಟ್ಟಿದ್ದ ಆ ವಾಕ್ಯ ಇಂದು ಕಿವಿಯಲ್ಲಿ ಗುಯ್ಯೆಂದು ಕೇಳಿಸುತ್ತಿದೆ........

ನಾನೂ ಕೂಡಾ ಹಾಗೆ ನಡೆದುಕೊಂದೆನಲ್ಲಾ..?
ಅಲ್ಲ ಎಲ್ಲರೂ ಹಾಗೇ ಮಾಡುವುದಂತೆ..

ಶೇಕ್ಸ್ ಪಿಯರ್ ನ ಪ್ರೀತಿ ಎಲ್ಲೂ ಇರುವುದಿಲ್ಲ..
ಕೇವಲ ಕಾದಂಬರಿ-ಕಥೆ -ಕಾವ್ಯಗಳಲ್ಲಿ ಮಾತ್ರ ಬಿದ್ದಿರುತ್ತದೆ..

 ದೈಹಿಕ ಸಾಮೀಪ್ಯ ಹೊಂದದೇ ಇರುವ ಪ್ರೇಮಿಗಳೇ ಇಲ್ಲ..
ಪ್ರೀತಿ ಎನ್ನುವ ಶಬ್ಧ ನಮ್ಮ Ego ವನ್ನು ಸಂತೋಷಪಡಿಸಲು ಮಾತ್ರ.

ಹಾಗೆಂದು ನಾನು ನನ್ನವರೊಂದಿಗೆ ದೈಹಿಕ ಸಾಮೀಪ್ಯ ಹೊದಿದ್ದಕ್ಕಾಗಿ ಇದನ್ನು ಸಮರ್ಥಿಸಿಕೊಳ್ಳುತ್ತಿಲ್ಲ...

ನಾನು ತಪಸ್ಸು ಮಾಡುತ್ತಿದ್ದ ಋಷಿಯಲ್ಲದಿದ್ದರೂ ನನ್ನ ಏಕಾಂತಕ್ಕೆ ಕಿಚ್ಚಿಟ್ಟ ರಂಗನಾಯಕಿ ಆಕೆ..

ಅವಳು ಸುಂದರ ಮುಖದ ಅದ್ಭುತ ನರ್ತಕಿ.
ನರ್ತಕಿ ಅಂದರೆ ಕಾಲೇಜು ನಾಟಕಗಳಲ್ಲಿ, 
ಆ ಡೇ ಈ ಡೇ ಗಳಲ್ಲಿ ಅದ್ಬುತವಾಗಿ ನರ್ತಿಸುತ್ತಿದ್ದಳು. ಕಣ್ಣೋ ಕೋಮಲ ಕೋಮಲ ಆಕೆಯ ಕಣ್ಣನ್ನು ನೋಡಿದಾಗ ಛಳಿಗಾಲದ ಬಾವಿಯನೆನಪಾಗುವುದು...
ಪ್ರಶಾಂತ ತಿಳಿ ತಂಪು ತಂಪಾದ ಕಂಪನ್ನು ಸೂಸುತ್ತಿತ್ತದು.. 
ನಕ್ಕರೆ ಚಿತ್ತದ ಹರಣ.....ನನ್ನದೆಯ ಸ್ವರ್ಗಕ್ಕೆ ಕಿಚ್ಚು ಹತ್ತಿಸಿ ನನ್ನ ಏಕಾಂತವನ್ನು ದಹಿಸಿದ್ದು ಅದೇ ನಗು..
ಮಾತು ವಿರಳ ಸರಳ. ನಗುವು ಭಾರತಿಯ ಜನತಾ ಪಕ್ಷದ ಹಳೆ ಅಧ್ಯಕ್ಷರ ಹಾಗೆ. 
ಮನಸು ಮುಗ್ದ ಮುಗ್ದ. 
ಮುಂಗುರುಳು ಮೋಹಕ ಮೋಹಕ. ಸರಿಯಾಗಿ ವಿವರಿಸಲು ಬಹುಷ್ಯ ಜಯಂತ ಕಾಯ್ಕಿಣಿ ಗು ಸಾಧ್ಯವಾಗಲಾರದು..
ಮನಸು ಮೊದಲ ಬಾರಿಗೆ ಬಾವಿಗೆ  ಬಿದ್ದಿದ್ದೆ ಅಲ್ಲಿ ನೋಡಿ...
ಹಾಳಾದ ಮನಸು ಸುಂದರ ಹುಡುಗೀರನ್ನ ನೋಡಿದ್ರೆ ಬಾಳ ಮುದುಡಿಕೊಂಡು ಇರತ್ತೆ ಒಳ್ಳೆ ನನ್ನ ಪ್ರೀತಿಯ ನಾಯಿ ಟಾಮಿ ತರ. ಆದ್ರೆ ಸುಂದರತೆ ಮುಗ್ದತೆ ಒಳ್ಳೆತನ ಎಲ್ಲವು ಸರಿಯಾದ ಪ್ರಮಾಣದಲ್ಲಿ ಮಿಶ್ರಿತವಾದ ಅವಳ ರೂಪು ನನ್ನ ಬರಸೆಳೆದಿತ್ತು. 
ಏಕೆ ಹೀಗಾಯ್ತೋ ನಾನು ಕಾಣೆನೋ. ಅವಳನ್ನ ನೋಡಿದಾಗಲೆಲ್ಲ ನನ್ನ ಮನಸು ಹಗುರಾಗುತ್ತಿತ್ತು.
ಚಿಕ್ಕ ವಯಸ್ಸಿಗೆ ಸಾವಿರ ಕನಸು ಸಾವಿರ ಕಸುಬು ಕಟ್ಟಿಕೊ೦ಡವನು ನಾನು. 
ಎಲ್ಲಾ ನೋವನ್ನು ಅವಳ ಕಣ್ಣು ಕೊಂದುಬಿಡುತಿತ್ತು. ಹಾಗೆ ಎಂಟು ತಿಂಗಳು ಕಳೆದೆ. 
ಮನಸ್ಸು ಎಷ್ಟು ಒತ್ತಾಯಿಸಿದರು ಅಷ್ಟು  ದಿನ ಹೇಳದೆ ನನ್ನೊಳಗೆ ಇಟ್ಟುಕೊಂಡಿದ್ದ  ನನ್ನ ಪ್ರೀತಿ ಎಂದು ನಾನು ಕರೆದು ಕೊಳ್ಳುವ ನಂದಾದೀಪದ ಬತ್ತಿಗೆ ಆಕೆಯನ್ನು  ಎಣ್ಣೆಯಾಗಿ  ಬರಮಾಡಿಕೊಳ್ಳ ಬೇಕೆಂದು ತಿರ್ಮಾನಿಸಿ ಅಂದು ಪ್ರೇಮ ಪ್ರಸ್ತಾಪ ಮಾಡಿದೆ..

ಅಂದು ಮೊಟ್ಟಮೊದಲಬಾರಿ ನಾನು ಬೇರೆಯವರ ಎದುರು ಮೊಳಕಾಲಿನ ಮೇಲೆ ನಿಂತು ಅಂಗಲಾಚಿದೆ....
ನನ್ನ ಮನದ ಕವಾಟದಲ್ಲಿ ಬಚ್ಚಿಡುವೆ..ನನ್ನ ಜೀವನದ ಪ್ರತಿ ಪುಟದಲ್ಲಿಯೂ ನೀನು ಇರುತ್ತಿಯಾ..?
ಅವಳ ಕೋಮಲ ಕಣ್ಣಿನಲ್ಲಿ ನನ್ನೂರಿನ  ಹೆಬ್ಬೆ  ಜಲಪಾತ ದುಮ್ಮಿಕ್ಕಿ ಹರಿದಿತ್ತು. 
ಇಷ್ಟು ದಿನ ನಿನಗಾಗಿ ಕಾದೆ ಆದರೆ ಮೊನ್ನೆ ಮೊನ್ನೆ ನನ್ನ ನೆಂಟರ ಹುಡುಗ ಮನೆಯವರ ಪ್ರೋತ್ಸಾಹದೊಂದಿಗೆ ಬಂದ ಒಪ್ಪಿಕೊಳ್ಳಲೇ ಬೇಕಾಯ್ತು. ನೀನಾಗಿ ಹೆಳುತ್ತಿಯ ಎನ್ನುವ ಭರವಸೆಯೇ ನನ್ನಲ್ಲಿ ಇರಲಿಲ್ಲ ಆದರೂ ಎಂತು ತಿಂಗಳು ಕಾದಿದ್ದೆ ಅಂತ ಅವಳು ಅಂದಾಗ ನಾನು ನಯಾಗರವಾಗಿದ್ದೆ.

ಅಂದು ಮೊಟ್ಟಮೊದಲಬಾರಿಗೆ ನಾನೊಂದು ವಿಷಯದಲ್ಲಿ ಸೋತಿದ್ದೆ...
ಅದು ನನ್ನ ಜೀವನದ ಮೊತ್ತಮೊದಲ ಸೋಲು...
ಯಾವತ್ತು ಯಾವ ವಿಷಯದಲ್ಲೂ ಸೋಳರಿಯದಿದ್ದ ನಾನು ಕುಗ್ಗಿಹೊಗಿದ್ದೆ...
ನನ್ನಲ್ಲಿದ್ದ ಗಾಳಿ ಖಾಲಿಯಾಗಿತ್ತು..
ಅಂದು ನನಗೆ ಏನು ಕಾಣುತ್ತಿರಲಿಲ್ಲ......!!!!!
ರಂಗನಾಯಕಿ ನನ್ನಾಸ್ಥಾನವನ್ನು ಬಿಟ್ಟು ಹೊರಟಿದ್ದಳು...!!!!!!!

ಆಯಿತು ಆಗಿ ಮೂರು ತಿಂಗಳಾಯಿತು ಆದರೂ ಮನಸು ಅಲ್ಲೇ ಸುಳಿದಾಡುತ್ತಿತ್ತು.
ಆಗ ಕೈ ಹಿಡಿದವಳೇ ಅವಳು....!


ನಿರೀಕ್ಷಿಸಿ.....ಎರಡನೇ ಹೆಣ್ಣು...


  

2 comments:

  1. ಮನದಾಳದ ವ್ಯಥೆ ಕತೆಯಾಗಿ ಹೊರ ಹೊಮ್ಮಿದೆ ಎ೦ಬುದು ಮೊದಲ ನೋಟಕ್ಕೇ ಅನಿಸುತ್ತಿದೆ. ತಮ್ಮ ಗೆಳೆಯನ ನೋವನ್ನು ಅರಿಯಬಲ್ಲವನು ನನ್ನ ಬಿಟ್ಟರೆ ಜಗತ್ತಿನಲ್ಲಿ ಇನ್ನೊಬ್ಬನಿರುವು ಅಸಾಧ್ಯ. ಕರುಳಿನ ನೋವು ಕರುಳಿಗೆ ಗೊತ್ತು, ಮನಸಿನ ನೋವು ಮನಕೆ ಗೊತ್ತು. ಋದಿರಕೆ ತ೦ಪನು ನೀಡಲು ಮನದನ್ನೆ ಇರದಾಗ ಆ ನೋವು ನೊ೦ದಿಹ ಜೀವಕೆ ಮಾತ್ರ ಗೊತ್ತಾದೀತು. ನಾನೊ೦ದು ಎರಡು ಸಾಲು ಗೀಛಿ ತಮಗೆ ಹೇಳಬೇಕೆ೦ದು ಈ ಹೊತ್ತಿಗೆ ಅನಿಸುತ್ತಿದೆ. ಸಾಲಿನಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ ಬಿಡಿ. "ಯಾರು ಏತಕೆ ಮುರಿದು ಬಿಸುಟರೋ ನುಡಿವ ಮೋಹನ ಮುರಳಿಯ. ಯಾವ ಸ್ವಾರ್ಥದ ಗಳಿಕೆಯಿಹುದೋ ಚಿವುಟಿ ತೆಗೆದರು ಚೈತ್ರವ. ಗಾಳಿಯು೦ಟು ಗ೦ಧವಿರದ ಬರಿದೆ ಮಾತಿನ ದಾಳಿಯು, ಸ್ಪರ್ಷವಿರದೇ ರಸವದೆಲ್ಲಿದೆ ಭಾವ ಚ೦ದನ ಬತ್ತಲು. ಮನಸು ಮುದುಡಿರೆ ಬರಿಶೂನ್ಯ ಭಾವ, ರಾಧೆ ಇರದೇ ಇಹಬಲ್ಲನೇ ಮಾಧವ." ನನಗೆ ಅನಿಸಿದ ಪ್ರಕಾರ ತಮ್ಮ ಇಡೀ ಲೇಖನವನ್ನು ನನ್ನ ಮೂರು ಸಾಲು ವಿವರಿಸಿದೆ. ಅದ್ಭುತ ಲೇಖನ. ಗುರುವಿಗೆ ಬೆರಳನೆ ಕಾಣಿಕೆ ಕೊಟ್ಟ ಆ ಏಕಲವ್ಯ, ಆದರೆ ಸೋತಿಹ ಇ೦ದು ತಮ್ಮಯ ಸ್ನೇಹದ ಲೇಖನಿಗೆ. ತಮ್ಮ ಲೇಖನಿ ಇಷ್ಟಕ್ಕೇ ನಿಲ್ದರಲಿ, ಗೆಳೆಯನ ನೋವಿನ ಅ೦ತರಾಳದ ತ೦ತಿಯನ್ನು ಸುಮಧುರವಾಗಿ ಮೀಟಿದ್ದೀರಿ. ಅದೇ ತೆರದಿ ಇತರ ವಿಷಯದ ಕಡೆಗೂ ನಿಮ್ಮ ಲೇಖನಿ ಹೆಡೆಯೆತ್ತಲಿ ಎ೦ದು ಹರಸುತ್ತಾ ನಿಮ್ಮ ಗೆಳೆಯ ಶಶಕ. (ಕ೦ಬನಿ ಮಿಡಿಯುವ ಗಾಯದ ಋದಿರದೊ೦ದಿಗೆ ಅಳುಕನು ಮುಚ್ಛಿ ನಗೆಯನು ಬಿಚ್ಚಿ, ನಸುನಗುತ ಹುಸಿನಗುತ ಶಭಾಷ್ ಎನ್ನುತಲಿ)

    ReplyDelete