Thursday, November 15, 2012

ಹೋಗಮ್ಮ ಹೋಗೆ..!

ಮೊನ್ನೆ ನನ್ನ ದೋಸ್ತರೊಂದಿಗೆ ಕೂತು ಪಟ್ಟಂಗ ಹೊಡಿತಾ ಇದ್ದೆ,

ಬಹುಷಃ ಮೂರನೇ ಲಾರ್ಜ್ ಖಾಲಿ ಆಗಿ ನಾಲ್ಕನೇಯದ್ದರ ಬಗ್ಗೆ ಯೋಚನೆ ಮಾಡ್ತಾ ಇದ್ವಿ....

ಗೆಳೆಯ ಒಬ್ಬ ಹಾಡ ಹಾಕ್ತೀನಿ ಸ್ಟೆಪ್ ಹಾಕ್ಬೇಕು ಅಂತ ಭಯಂಕರ ಮೂಡ್ ಬಂದಿದೆ ಮಚ್ಚಾ ಅಂತ ಹೇಳಿದ,

ಪಾಪ ಮೊನ್ನೆ ತಾನೆ ಲೇಟೆಸ್ಟ್ ಬ್ರೇಕ್ ಅಪ್ ಆಗಿದ್ದಕ್ಕಾಗೋ ಏನೋ "ಮೋಸ ಮಾಡಲೆಂದೆ ನೀನು ಬಂದೆಯಾ" ಹಾಕಿದ್ದ...

ನಾವೆಲ್ಲ ಅವನು ಅಯ್ಯಯ್ಯೋ ಅನ್ನೋತನಕ ಹೊಡೆದಮೇಲೆ ಬೇರೆ ಹಾಡನ್ನ ಹಾಕಿದ...

ಆದರೆ ನಮ್ಮ ಮೂಡ್ ಹಾಳಾಗಿತ್ತು.....

ಎಲ್ಲಾ ತೀರ್ಥಂಕರರಂತೆ ನಾವೂ ಭಯಾನಕವಾಗಿ ಫಿಲಾಸಫಿ ಜಡಿತ ಶುರು ಹಚ್ಕೋಂಡು ನಾವು ಮಾಡ್ತಾ ಇರೋದು ತಪ್ಪಲ್ಲ ಯಾಕಂದ್ರೆ,

ಕುಡಿಯೋದು,ತಿನ್ನೋದು,ಹೊಗೆ ಬಿಡೋದ್ರಿಂದ ನಮ್ಮನ್ನ ಬಿಟ್ಟು ಬೇರೆ ಯಾರಿಗೂ ತೊಂದ್ರೆ ಆಗಲ್ಲ.

ಆದ್ರೆ ಕೆಲವರಿಗೆ ಇದಕ್ಕಿಂತ ಕೆಟ್ಟ ಚಟ ಇರುತ್ತೆ ಅವರು ಬೇರೆ ಅವರ ಜೀವನದ ಜೊತೆ ಆಟ ಆಡಿ ಅವರ ಜೀವನಾನ ಸಿಗರೇಟ್ ಆಶ್ ಕಿಂತ ಕಡೆ ಆಗೋಹಾಗೆ ಹಾಳ್ ಮಾಡ್ತಾರೆ,

ಇನ್ನು ಕೆಲವರು ಭಾವನೆ ಇನ್ನಂದು ಅಂತ ಮನಸ್ಸಿನ ಜೊತೆ ಆಟ ಆಡಿ ಮನಸ್ಸಿಗೆ ಲಿವರ್ ಕ್ಯಾನ್ಸರ್ ಗಿಂತ ದೊಡ್ದದಾದ ಮನಸ್ಸಿನ ಕ್ಯಾನ್ಸರ್ ಬರಿಸ್ತಾರೆ,

ಬರಿ ಪರ ಪರ ಅಂತ ಕೆರ್ಕೋಂಡ್ರೆ ಮಾತ್ರ ಗಾಯ ದೊಡ್ಡದಾಗಿ ನಾವು ಸಾಯೋದಲ್ಲ.......

ಬದಿಕಿದ್ದೂ ಇಲ್ದೆ ಇರೋ ತರ ಆಗ್ತೀವಲ್ಲ ಅದು ನಿಜವಾದ ಸಾವು......................


ನಾನು ಮಜಾ ಮಾಡ್ತಾನೇ ಸಾಯ್ಬೇಕು ಅಂತ ಡಿಸೈಡ್ ಮಾಡ್ಕೋಂಡು ಬದುಕ್ತಾ ಇರೋನು.

ಆದ್ರೆ ಬೇರೇವ್ರು ಯಾಕೆ ಆ ಲೆವೆಲ್ಲಿಗೆ ಪ್ರೀತಿ ಮಾಡ್ತಾರೋ ಗೊತ್ತಾಗಲ್ಲ...

ನನ್ನ ಪ್ರಕಾರ ಪ್ರತೀ ಸಲ ನಂಗೆ ನಿಜವಾದ ಪ್ರೀತಿ ಆಗುತ್ತೆ ಹಾಗಂತ ಬ್ರೇಕಪ್ಪೂ ಆಗುತ್ತೆ....

ನಾನು ಪ್ರೀತಿ ಮಾಡೋಷ್ಟೂ ದಿನ ಅವಳೇ ನನ್ ಪ್ರಾಣ ಆದ್ರೆ ಬಿಟ್ಟ ಮರುಕ್ಷಣ ಅವಳು ಒಳ್ಳೆ ಹುಡುಗಿ ಅಷ್ಟೇ!

ಯಾಕೆ ರಿಯಾಲಿಟಿ ಅರ್ಥ ಆದ್ರೂ ಆಗ್ದಿರೋ ಥರ ನಮ್ಗೇ ನಾವು ಮೊಸ ಮಾಡ್ಕೋಬೇಕು ಹೇಳಿ.??

ಸುಮ್ನೆ ಅವಳ ನೆನಪಾಗುತ್ತೆ ಅದೂ ಇದೂ ಅಂತ ಅಳ್ತಾ ಇರೋದಿಕ್ಕಿಂತ ಹೊಸ ಹಕ್ಕಿ ಹುಡ್ಕೋದ್ ಒಳ್ಳೇದು....

 ಕೋಗಿಲೆ ಮತ್ತೆ ಹಾಡೇ ಹಾಡತ್ತೇ...


Guys go find a new bird instead of crying in front of some bitch who doesn't care about you any more.
Don't force her to say ass hole in the same mouth which she said I LOVE YOU!







Wednesday, July 18, 2012

ಇಂಧನ ತೀರಿತು..!!

ಇಂಧನ ತೀರಿತು..




ಒಂಭತ್ತು ತಿಂಗಳು ಹೊರುವ ಒಂಭತ್ತು ನಿಮಿಷ ಹೆರುವ ನೋವನ್ನೂ ಕೊಡದೇ ಮಗನಾಗಿದ್ದಕ್ಕೋ ಏನೋ......

 ನನ್ನ ಜೀವನದ ಬಹುಮುಖ್ಯ ಪ್ರೀತಿಯ ಸೆಲೆ ಬತ್ತಿಹೋಯಿತು....

ಅಲ್ಲಲ್ಲ ನಾನೇ ಬತ್ತಿಸಿದೆ.,

ನನಗೆ ಅತೀ ಇಷ್ಟವಾಗುವ ಸ್ಥಳ ನನ್ನ ಅಮ್ಮನ ಮಡಿಲು..

ಅದೆಷ್ಟೋ ಸಲ ಅದರಲ್ಲಿ ಮಲಗಿ ಕೇಳಿದ್ದೆ ನನ್ನಮ್ಮ ನನ್ನ ಬಿಟ್ಟು ಎಲ್ಲೂ ಹೋಗಲ್ಲ ಅಲ್ವಾ ಅಂತ........

ಪ್ರತೀ ಸಲ ಬಂದ ಉತ್ತರ ನಾವೆಲ್ಲೂ ಹೋಗಲ್ಲ ನೀನು ಇರಬೇಕು ಅಷ್ಟೆ??



ಯಾಕೋ ಇಲ್ಲಿ' ಅಮ್ಮಾ ನಿನ್ನ ಎದೆಯಾಳದಲ್ಲಿ' ಹಾಡಿನ ಸಾಲುಗಳು ನೆನಪಾಗ್ತಿವೆ,



"ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕಾ ಮೀನು

ಮಿಡುಕಾಡುತಿರುವೆ ನಾನು

ಕಡಿಯಲೊಲ್ಲೆ ನೀ ಕರುಳ ಬಳ್ಳಿ, ಒಲವೂಡುತಿರುವಾ ತಾಯೇ,

ಬಿಡದಾ ಭುವಿಯಾ ಮಾಯೆ".



ರಥಿಕ ಮಾಯೆಗೆ ಬಲಿಯಾಗಿ ರಥ ಅಪಘಾತಕ್ಕೆ ಈಡಾಗುವಂತೆ ನಾನೂ ಮಾಯೆಗೆ ಬಲಿಯಾಗಿ ನನ್ನ ಜೀವನ ರಥದ ಎರಡು ಗಾಲಿಗಳನ್ನೇ ಕಳೆದುಕೊಂಡೆ..

ಅದು ನನ್ನಮ್ಮನ ಪ್ರೀತಿ ಮತ್ತು ಸಾನಿಧ್ಯ.



"ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ?

ದೂಡು ಹೊರಗೆ ನನ್ನ,

ಓಟ ಕಲಿವೆ, ಒಳನೋಟ ಕಲಿವೆ

ನಾ ಕಲಿವೆ ಊರ್ಧ್ವಗಮನ

ಓ ಅಗಾಧ ಗಗನ"



ನಾನು ಅಮ್ಮನ ಗೂಡುಬಿಟ್ಟು ಹೊರಗೆ ಪ್ರಪಂಚ ನೋಡಬೇಕು ಅಂತ ಬಂದೆ,

ನನ್ನ ಮನಸ್ಸಿನ ಹುಚ್ಚು ಓಟ ನಿಯಂತ್ರಿಸಲಾಗಲಿಲ್ಲ, ಒಳನೋಟದ ಅರ್ಥ ಕಾಣಲೇ ಇಲ್ಲ.

ಅಗಾಧ ಪ್ರಪಂಚದ ತಗಾದೆ ವಿಷಯಗಳಿಗೆಲ್ಲ ವಸ್ತುವಾದೆ.

ನನ್ನ ನೆಲೆ ಬಿಟ್ಟು ಹಾರಿ ಆಗಿತ್ತು.





" ಮೇಲೆ ಹಾರಿ ನಿನ್ನ ಸೆಳೆತ ಮೀರಿ

ನಿರ್ಭಾರ ಸ್ಥಿತಿಗೆ ತಲುಪಿ

ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀರಲು ಬಂದೇ ಬರುವೆನು

ಮತ್ತೇ ನಿನ್ನ ತೊಡೆಗೇ

ಮೂರ್ತ ಪ್ರೇಮದೆಡೆಗೆ"



ನಿರ್ಭಾರ ಸ್ಥಿತಿಯ ಅರಿವು ನನಗಿಲ್ಲ ಆದರೆ ನಿರ್ಭಾವುಕನಾಗಿರಲು ಯತ್ನಿಸುತ್ತಿದ್ದೇನೆ..

ಇಂಧನ ಯಾವತ್ತೋ ತೀರಿ ಹೋಗಿದೆ

ಅಮ್ಮನ ಮಡಿಲಲ್ಲಂತೂ ಜಾಗವಿಲ್ಲ....

ಮನದಲ್ಲಿ????????

ಗೊತ್ತಿಲ್ಲ.............!



Friday, July 15, 2011

ಮತ್ತೆ ಓಡಲಾರಂಭಿಸಿದ ರೈಲು.

ನೆನೆಗುದಿಗೆ ಬಿದ್ದಿದ್ದ ಯೋಜನೆಗಳೆಲ್ಲಾ ಮತ್ತೆ ಚೈತನ್ಯದಿಂದ ಓಡಲಾರಂಭಿಸಿದಂತಿದೆ...


ಇದ್ದೂ ಇಲ್ಲದಂತಿದ್ದ ನನ್ನ ತವರೂರುಗಳಲ್ಲಿ ಒಂದಾದ ತಾಳಗುಪ್ಪಾ ಶಿವಮೊಗ್ಗ ಮೀಟರ್ಗೇಜ್ ರೈಲು ಸೇವೆ ಇದೀಗ ಬ್ರಾಡ್ ಗೇಜ್ ಗೆ ಪರಿವರ್ತಿತವಾಗಿ ಓಡುತ್ತಿದೆ.

ಬಹುಷಃ ನಾನು ನಾಲ್ಕನೇತರಗತಿಗೆ ಹೋಗುವ ವಯಸ್ಸಿರಬೇಕು ನಾನು ನನ್ನ ಕಾಚಾ ದೋಸ್ತ್ ಸುಹಾಸ ಆ ರೈಲಿನಲ್ಲಿ ತಾಳಗುಪ್ಪದಿಂದ ಸಾಗರದ ವರೆಗೆ ಹೋಗಿ ಪಾನಿ ಪುರಿ ತಿಂದು ಬರುತ್ತಿದ್ದೆವು...

ಮೊದಲಿಗೆ ಕೇವಲ ೨ಡಬ್ಬ ಮಾತ್ರ ಇತ್ತು. ಆದರೆ ಈಗ ಸುಮಾರು ೧೭ಡಬ್ಬಗಳಿದೆ ಆ ರೈಲಿಗೆ.

ನನ್ನ ಜೀವನ ಕೂಡಾ ಬದಲಾಗಿದೆ...

ಮನಕ್ಕೆ ಒಂದು ಮಟ್ಟಿನ ಬೇಲಿ ಇದ್ದ ವ್ಯವಸ್ಥೆಯಿಂದ ಸೀದಾ ಬಟಾಬಯಲಿಗೆ ಬಂದಿದ್ದೇನೆ..

ಹೊಸ ಗೆಳೆಯರು,ಗೆಳತಿಯರು,ಅಧ್ಯಾಪಕರು,ಅಧ್ಯಾಪಿಕೆಯರು, ಪಾರ್ಕಿಂಗ್ ನ ಅಂಕಲ್, ಆಫಿಸ್ ನ ಪ್ರಕಾಶಣ್ಣ ಪ್ರಿನ್ಸಿ ನೀತಿಶ್ರೀ...........

ಗಣೇಶಣ್ಣನ ಅಂಗಡಿ, ಪಕ್ಕದ ಬಯಲು...ಶಿಮೊಗ್ಗ ರೋಡಿನ ಮಂಗಳೂರು ಕ್ಯಾಂಟೀನ್, ಚಲುವಣ್ಣನ ಮಿರ್ಚಿ,ಓಂ ಶಾಂತಿ ಮೆಸ್ ನ ಊಟ.ವಾರಕ್ಕೆರಡು ಬಾರಿ ಸರೋವರ ವಿಹಾರ..

ವೂ ಪಾಯಿಂಟ್, ಜೋಗದ ಐ.ಬಿ.,ತಾಳಗುಪ್ಪ ಐ.ಬಿ,ಸ್ವಾಮಣ್ಣನ ಪಾನಿ ಪುರಿ, ಮಾವಿನಗುಂಡಿ ಪಿ.ಜಿ ಅಂಗಡಿಯ ಸೂಪರ್ ಮಂಡಕ್ಕಿ ಮತ್ತೆ ಬ್ರೆಡ್೦೦೦ಲೆಟ್,



ಒಟ್ಟೂ ಹೊಸ ಬಣ್ಣ ಹಚ್ಚಿ ರಂಗಸ್ಥಳಕ್ಕೆ ಇಳಿದಾಗಿದೆ.

Friday, March 11, 2011

ಜೂಜಾಟ- ಜೀವನ"ದಾಟ"

ನಾವು ಏನ್ ಮಾಡ್ತಾ ಇದ್ದೇವೆ?
ಲಕ್ಷ್ಮೀನಿವಾಸ್ ಮಿತ್ತಲ್ ಗೆ ನಮಗೆ ಹೋಲಿಸಿ ಕೊಳ್ಳಿ..
ಅವರು ಒಬ್ಬ ಅತ್ಯುತ್ತಮ ವ್ಯಾಪಾರಿ ಅವರು ಜೂಜಾಡುವುದು ದುಡ್ಡಿಟ್ಟುಕಂಡು..
ನಾವೂ ಒಂಥರಾ ಲಕ್ಷ್ಮೀ ಮಿತ್ತಲ್ ಗಳೇ ನಾವು ಜೂಜಾಡುವುದು ಸಂಬಂಧಗಳ ಬಂಧವಿಟ್ಟುಕೊಂಡು..
ಗಳಿಸೋದು ಸುಖ-ಶಾಂತಿ ಮತ್ತು ಇನ್ನೇನೇನೋ!!
ಆತ ನಿರ್ಜೀವ ವಸ್ತು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ,
ನಾವು ಜೀವಂತವಿದೆ ಅಂದು ಕೊಂಡಿರುವ ಮನಸ್ಸನ್ನ  ಇಟ್ಟುಕೊಂಡು ವ್ಯವಹಾರ ಮಾಡುತ್ತೇವೆ..!

There is no one in the world who works only for others !

ಮೊನ್ನೆ ಚಿತ್ರ ಸಂತೆಗೆ ಹೋಗಿದ್ದೆ,
ಒಂದು ಅದ್ಭುತ ಚಿತ್ರ ಕೊಂಡುಕೊಳ್ಳುವ ಆಸೆಯಾಯಿತು ಆತ ಹೇಳಿದಷ್ಟು ಕೊಟ್ಟು ಆ ಚಿತ್ರ ತಂದೆ..
ದುಡ್ಡು-ಚಿತ್ರಗಳನ್ನ ವಿಕ್ರಯ ಮಾಡಿಕೊಂಡು ಬಂದು ನನ್ನ ಗೆಳತಿಯೊಬ್ಬಳ ಹುಟ್ಟಿದ ಹಬ್ಬದ ದಿನ ಅದನ್ನ ಕೊಟ್ತೆ.

She was really happy for that and she gave me a sweet kiss on my cheeks:)

So, ಚಿತ್ರದ ಬದಲು ನಾನು ಬೇರೆಯದ್ದನ್ನ ಪಡೆದು ಕೊಂಡಿದ್ದೆ..
Mostly ನಾನು direct ಆಗಿ ಆ ದುಡ್ಡು ಕೊಟ್ತಿದ್ದರೆ ನನಗೆ ಆಕೆ ಕೊಟ್ಟದ್ದು ಸಿಗ್ತಿರಲಿಲ್ಲವೇನೋ..
I can justify my self by saying that i added my feelings to that painting before presenting that ಅಂತ..
ಆದರೆ ನಿಜ, ನಾವು ಎಷ್ಟು ಖರ್ಚು ಮಾಡ್ತೇವೆ ಹೇಗೆ ಅದನ್ನ present ಮಾಡ್ತೇವೆ ಅನ್ನೋದರೆ ಮೇಲೆ ನಮಗೆ ಸಿಗುವ returns Depend  ಆಗಿದೆ.
ಇದು ಕೇವಲ ಒಂದು ಝಲಕ್ ಮಾತ್ರ ಈ ತರಹದ ಕೊಡು ಕೊಳ್ಳುವಿಕೆ ಪ್ರತಿಕ್ಷಣ ನಡೀತಾ ಇರುತ್ತೆ..
ಸೊ ಸ್ವಲ್ಪ ಜಾಸ್ತಿ involve ಆಗಿ ನಿಮ್ಮ ವ್ಯವಹಾರದಲ್ಲಿ ಜಾಸ್ತಿ ಲಾಭ ತೆಗಿರಿ..

All the best!!


Tuesday, March 8, 2011

ರಾಗ-ಅನುರಾಗ


ಸಂಗೀತ ಯಾಕೆ ಇಷ್ಟವಾಗುತ್ತೋ ಗೊತ್ತಿಲ್ಲ..
ಕೇವಲ ಶಬ್ಧದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತ ಹೇಳೋಣಾ ಅಂದ್ರೆ ಬೇರೆವ್ರು ಮಾತಾಡಿದ್ದು ಕಿರಿಕಿರಿ ಉಂಟು ಮಾಡೋದು ಜಾಸ್ತಿ..
ನಿಮ್ಮ ಮೂಡ್ ಅನ್ನೋದು ಎಷ್ಟೇ ಖರಾಬ್ ಆಗಿದ್ರೂ ಅದನ್ನ ಮೋಡ್ ಮಾಡೋಕೆ ಕೇವಲ ಎರಡು ಹಾಡು ಸಾಕು..
ರಾಗ ಗೊತ್ತಾಗತ್ತೋ ಇಲ್ವೋ..ಭಾವ ಅರ್ಥ ಆಗತ್ತೋ ಇಲ್ವೋ..ಆದ್ರೂ ಮನಸ್ಸಿಗೆ ನಿಮ್ಮದಿ ಮಾತ್ರ ಆಗತ್ತೆ..
ಅದು ಶುದ್ಧ ಶಾಸ್ತ್ರೀಯ ಸಂಗೀತನೇ ಆಗಿರಬಹುದು ಅಥವಾ ಪಾಶ್ಚಾತ್ಯನೇ ಆಗಿರಬಹುದು ಕೇಳುವ ಮನಸ್ಸು ಸಂಗೀತದೆಡೆಗೆ ಒಲವು ಹೊಂದಿದ್ರೆ ಸಾಕು..
.
You have to sense the beat for fraction of second, and after it will make you hear and takes you to heaven!!

Tuesday, February 22, 2011

ಭಾವಗಳ ಹೂರಣದಂತ್ಯ...?



ಮುಚ್ಚಿದ ಬಾಗಿಲಿನಾಚೆಯ ಸತ್ಯ
ಕಂಡೂ ಕಾಣದಂತಿರುತಿದೆ ನಿತ್ಯ

ದೂರಾದ ಪ್ರೀತಿಯ ಕೃತ್ಯ
ಅನುಭವಿಸಲಾಗದ ಭಾವಗಳ ನೃತ್ಯ

ಕೈಗೆಟುಕದಾ ಮಾಯೆಯು ಮಿಥ್ಯ
ಭಾವಗಳ ಹೂರಣದಂತ್ಯ......?

ಚಕಮಕಿ ಕಲ್ಲುಗಳ ಚಕಮಕಿಸುತ
ಕುಳಿತಿಹೆ ಕತ್ತಲ ಕೋಣೆಯೊಳ;

ಭಾವಗಳ ಬಣ್ಣತಿಳಿಯಲು ಸರ್ಚ್ ಲೈಟ್ ಬಳಸಲಾದೀತೆ?
ಬಂಧನದ ಬಂಧ ಅರಿಯಲು ಕತ್ತಲಿನೊಳಗೆ ಕಣೆ;
ಸುಟ್ಟೀತೆ ನನ್ನಂತರಂಗದ ಬವಣೆ??


Tuesday, January 25, 2011

ಕಾರಿರುಳೊಳಾಗಸದಿ ಚಂದ್ರಮನ ಹುಡುಕುವ ಯತ್ನ ..?

ಹೆತ್ತವರಿಗೆ ಹೆಗ್ಗಣವೂ ಮುದ್ದಂತೆ...
ಹಾಗೆ ಪ್ರೀತಿಸಿದವರಿಗೆ ಎಮ್ಮೆಯದುಕೂಡಾ   Stunning Beauty ಎಂದೆನಿಸುವುದು ಸಹಜ...

ಆದರೆ ನನ್ನಾಕೆ ಹರಿಣ ದಂತವಳು..
ಆಕೆಯ ಕಣ್ಣು ಮತ್ತುಬರಿಸುವಂಥದ್ದು...
ನಾನು ಮತ್ತೊಮ್ಮೆ ಬಿದ್ದಿದ್ದೆ...
ಆಕೆಯ ಕುದುರೆಯ ಬಾಲದಂಥಾ ಕೂದಲಿಗೆ ಮನಸೋತಿದ್ದೆ...
ಕುದುರೆಯ ಬಾಲ ಹಿಡಿದವರು ಉದ್ಧಾರವಾಗುವುದು ಕಡಿಮೆಯಂತೆ...
ಗೆದ್ದರೆ ಜಾಕ್ ಪಾಟ್..!
ನಮ್ಮಂಥ ಹುಡುಗ ಮುಂಡೆವಕ್ಕೆ ಅದೇ ಮತ್ತುಬರಿಸುವುದು...

ಅವಳೋ ಅವಳಷ್ಟು ಸುಂದರವಲ್ಲ ಮುಗ್ದೆಯೂ ಅಲ್ಲ ಆದರೆ ಕಣ್ಣಿನಲ್ಲಿ ಎಂತದೋ ಹೊಳಪು.
ಅವಳಷ್ಟು ಸುಂದರವಾಗಿರದಿದ್ದರೂ ಬ್ರಹ್ಮ ಸೃಷ್ಟಿಸುವಾಗ ಒಂದು ದಿನ ಇವಲಿಗಾಗಿಯೇ ವೇಸ್ಟ್ ಮಾಡಿ ಮಾಡಿದ್ದಂತೂ ಸುಳ್ಳಲ್ಲ.
ಅವಳು ವೆರಿ   womanly...!
 ನಾನು ಒಬ್ಬ  Womanizer..:)
ಅವಳಲ್ಲಿ ನನಗೆ ಇಷ್ಟವಾಗಿದ್ದು ಎಂದರೆ ಅವಳ ಕಷ್ಟಗಳನ್ನು ನನ್ನ ಎದೆಯ ಮೇಲೇ ಕಣ್ಣೀರಿಡುತ್ತಾ ಹಂಚಿಕೊಳ್ಳುವ ಗುಣ.
ನಾನಾದರೋ ಕತೆಯಲ್ಲ ಜೀವನದ ಜುಲಿ ಲಕ್ಹ್ಸ್ಮಿಗಿಂತ ಬೇರೆಯವರನ್ನು ಸಮಾಧಾನಮಾದುವುದರಲ್ಲಿ ಒಂದು ಕೈ ಮೇಲು.
ಹಾಗೆ ಅವಳ ಕಷ್ಟ ಹೇಳುತ್ತಾ ಹೇಳುತ್ತಾ ನನ್ನ ಹತ್ತಿರವಾಗಿ ಹೋಗಿದ್ದಳು...
ನಾನು ನನ್ನ  ಅಂತರಂಗನಾಯಕಿಯನ್ನು ಮರೆಯಲು ಪ್ರಯತ್ನಿಸುತ್ತಿದ್ದೆ..
ಮೂರು ತಿಂಗಳು  ಹಗಲು ರಾತ್ರಿ ಎನ್ನದೇ ಅವಳ ನೆನಪಲ್ಲಿ ಕೊರಗಿದೆ..
ಆಗತಾನೆ  ಕಳೆದುಹೋದ ಅವಳ ಪ್ರೀತಿಯನ್ನು ಇವಳ ಮಡಿಲಲ್ಲಿ ಕಂಡುಕೊಳ್ಳತೊಡಗಿದ್ದೆ  ಆಕೆಯನ್ನು ಮರೆಯಲು ಯತ್ನಿಸುತ್ತಿದ್ದೆ  . ಮರೆಸಿಬಿತ್ತಿದ್ದಳು ಅ೦ದರೆ ಸುಳ್ಳಾಗಲಾರದು...
ಆದರೆ ಜೀವನ ನಾವಂದು ಕೊಳ್ಳುವುದಕ್ಕಿಂತ ಹೆಚ್ಚು ತಿರುವುಗಳನ್ನು ಹೊಂದಿರುತ್ತದೆ..
ಮುಂದಾದದ್ದೇ ಬೇರೆ,
ಅವಳು ಆಗಲೇ ಒಬ್ಬನನ್ನು ಪ್ರೀತಿಸುತ್ತಿದ್ದಾಳೆ ಅವನನ್ನೇ ಮದುವೆ ಮಾಡಿಕೊಲ್ಲಲಿದ್ದಾಳೆ ಎಂದು ನನಗೆ ತಿಳಿಯಿತು.
ಆದರೂ ಎಲ್ಲೋ ಒಂದು ಆಸೆ.
ಅವಳೇ ಹುಟ್ಟಿಸಿದ್ದು.
ನಿನ್ನಷ್ಟು ಒಳ್ಳೆ ಹುಡುಗನನ್ನು ನಾನು ನೋಡಿಲ್ಲ,
ಅವನ ಕ೦ಡರೆ ನನಗೆ ಆಗುವುದೇ ಇಲ್ಲ.
ಅವನು ನನ್ನ ಚಿತ್ರಹಿಂಸೆ ಮಾಡುತ್ತಾನೆ.
ಅವನಿಂದ ಬಿಡುಗಡೆ ಸಿಕ್ಕರೆ ಸಾಕು.
ಆದರೆ ನಾನು ಅವನನ್ನೇ ಮದುವೆ ಆಗೋದು ಎಂದು ಪದೇ ಪದೇ ಹೇಳುತ್ತಿದ್ದಳು.
ಆದರೂ ನಾನು ಕನಸು ಕಟ್ಟಿಕೊಳ್ಳುವ ಹಾಗೆ ಮಾಡುತ್ತಿದ್ದಳು.
ಅ೦ಟಿಕೊ೦ಡು ಹಗಲು ಮಾಡಿದ ರಾತ್ರಿಗಲೆಷ್ಟೋ ಲೆಕ್ಕಕ್ಕೆ ಸಿಗವು.
ಆದರೆ ನಮ್ಮಿಬ್ಬರಲ್ಲಿ ಯಾವುದೇ ರೀತಿಯಾದ ಅನೈತಿಕ ಎನ್ನುವಂತ ಸಂಬಂದ ಯಾವತ್ತೂ ಇಣುಕಲಿಲ್ಲ.
ನಾನು ಅವಳಿಗೆ ಒಳ್ಳೆಯ ಸ್ನೇಹಿತನಾದೆ, ಹಿತೈಶಿಯಾದೆ, ಅತ್ತಾಗ ತ೦ಪಾದೆ, ನಕ್ಕಾಗ ಹಿಗ್ಗಿದೆ.
ಅವಳಿಗಾಗಿ ನಾನು ಮಾಡದೆ ಇರುವ ಕೆಲಸಗಳೇ ಇಲ್ಲ.
ಅದೊಂದು ರಾತ್ರಿ ಹಾಳಾದ ವಾಶಿಂಗ್ machine ಕೆಟ್ಟು ಕೂತಿತ್ತು.
ಅವಳು ಸಾವಿರ ಬಟ್ಟೆ ಹೊತ್ತುಕೊಂಡು ಬಂದಳು. machine ಗೆ ಹಾಕಿದೆ. ತಿರುಗಲಿಲ್ಲ.
ಅವಳಿಗೆ ಮೈ ಹುಷಾರಿರಲಿಲ್ಲ.
ಪಾಪ ಏನು ಮಾಡುವುದು..?  ಅವಳು ಕೆಲಸ ಮಾಡುವುದು ನನಗೆ ಇಷ್ಟವಾಗುವುದಿಲ್ಲ.
ಅವಳನ್ನು ನನ್ನ ಕೋಣೆಯಲ್ಲೇ ಮಲುಗಿಸಿ, ನಾನು ಅವಳಿಗೆ ತಿಳಿಯದ ಹಾಗೆ ಬಟ್ಟೆಯನ್ನು ಕೈಯಲ್ಲಿ ಒಗೆದಿದ್ದೆ.
ಮನೆಯಲ್ಲಿದ್ದಾಗ  ನನ್ನ ಬಿಡಿವಸ್ತ್ರವನ್ನೂ ಉಪಯೋಗಿಸಿದ ಮೇಲೆ ಮುಟ್ಟುತ್ತಿರಲಿಲ್ಲ..ಪಾಪ ಅಮ್ಮ ತೊಳೆದು ಹಾಕುತ್ತಿದ್ದಳು..
ಇನ್ನು ಹೊರಗಡೆ ಬಂದಮೇಲೆ ಹೇಗೂ ಲಾಂಡ್ರಿ,ಕೆಲಸದವಳು ಅಂತ ಅಭ್ಯಾಸ ಆಗಿತ್ತು...
ಅಮ್ಮ ತೊಳೆದು ಸ್ವಲ್ಪ ಒಣಗಿಸಲು ಹಿಂದಿ ಹಾಕು ಅಂತ ಎಷ್ಟು ಹೇಳಿದರೂ ಟಿವಿ ಎದುರಿನಿಂದ ಹಂದುತ್ತಿರಲಿಲ್ಲ...! 
ನನ್ನ ಬಟ್ಟೆಯನ್ನೇ ಎಂದು ಹಿ೦ಡಿದವನಲ್ಲ..
ಅಂದು  ಅವಳ ಬಟ್ಟೆ ಒಗೆದಿದ್ದೆ...!!!
ನನ್ನ  ನಿಜವಾದ ಪ್ರೀತಿಗೆ ಇನ್ನೊಂದು ನಿದರ್ಶನ ಬೇಕಾ..?(ಅಂತ ಅಂದುಕೊಂಡಿದ್ದೆ)
ಕಾಲು ನೋವು ಅಂದಾಗ ಕಾಲು ಒತ್ತಿದೆ, ತಲೆಗೆ ಎಣ್ಣೆ ಹಚ್ಚಿದೆ...
ನಾವು ಪರಸ್ಪರ ವಿರೋಧಿಗಳು ನಡೆಯುತ್ತಿರುವ ಕಾರ್ಯಕ್ರಮದಲ್ಲಿ..
ಆದರೆ  ಸ್ಪರ್ದೆ ಎಂಬುದನ್ನೂ ಮರೆತು ಸಹಾಯಮಾಡಿದೆ...
ನನ್ನತನವನ್ನು ನಾನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದನ್ನು ತಿಳಿದ ಮೇಲು ಅವಳ ಮನಸ್ಸಿಗೆ ನೋವಾಗಬಾರದು ಎಂಬ ಉದ್ದೇಶದಿಂದ ಎಲ್ಲವನ್ನೂ ಮಾಡಿದೆ.
ಬಟ್ಟೆ ಒಗೆದುಕೊಟ್ಟ ಆ ರಾತ್ರಿ ಇನ್ನೂ ನನ್ನ ಕಣ್ಣ ಮುಂದಿದೆ.
ಅವಳು ಭಾವಪರವಶಲಾಗಿದ್ದಳು ಅವಳ ಆ ಭಾವ ಸಿಹಿ ಚು೦ಬನವಾಗಿ ಮಾರ್ಪಟ್ಟಿತ್ತು.
ನೀನು ನನಗೆ ಮುಂಚೆ ಸಿಗುವುದಕ್ಕೆ ಏನಾಗಿತ್ತು?
ಬೇಸರದಲ್ಲಿ ನನ್ನ ಕಪಾಳಕ್ಕೆ ಬಾರಿಸಿದಳು ಕೂಡ.
ನಾನೇನು ಮಾಡಲಾದೀತು,
ನಮ್ಮ ತಂದೆ ತಾಯಿಗಳು ನಿನ್ನ ಊರಿನಲ್ಲಿ ಅಥವಾ ನಿನ್ನ ತಂದೆ ತಾಯಿ ನನ್ನ ಊರಿನಲ್ಲಿ ಹುಟ್ಟಲಿಲ್ಲ...
ಆದರೆ ಈಗಲೂ ಕಾಲ ಮಿಂಚಿಲ್ಲ ನಿನಗಾಗಿ ಈ ಜೀವ ಎಂದು ಕಾಯುತ್ತಿದೆ ಅವನನ್ನು ಮರೆತು ಬಾ..
ನನ್ನ ನ್ಜೀವನದ ಅಂಚಿನ ವರೆಗೂ ನಿನ್ನ ಸುಖವಾಗಿ ನೋಡಿಕೊಳ್ಳುವೆ ಎಂಬ ಭರವಸೆಯನ್ನು ಕೊಟ್ಟಿದ್ದೆ..
ಭರವಸೆಗೆ ಅವಳ ಹತಾಶೆಯ ನಗು ಉತ್ತರವಾಗಿ ಬಂದಿತ್ತು...!!!
ಆದರೂ ಆತನಿಂದ ದೂರಾಗಲು ಕಾರಣ ಇಲ್ಲವೇ...?
ಆಕೆ ಪೇಲವ ನಗೆ ನಕ್ಕು ಉತ್ತರಿಸಿದಳು..
ಅದರ ಸಾರಾಂಶ ನನ್ನ ಶಬ್ಧಗಳಲ್ಲಿ.......!
ಆಕೆಯ ಸ್ಥಿತಿ ನಿಜವಾಗಿಯೂ ರೇಸ್ ಕುದುರೆಯಂತೆಯೇ ಆಗಿತ್ತು..
ಇಷ್ಟ ವಿತ್ತೋ ಇಲ್ಲವೋ ಆಕೆಯ ಯಜಮಾನನ ಮಾತು ಕೇಳುವುದು ಅನಿವಾರ್ಯ..
ಅದು ಎಷ್ಟು ಪೆಟ್ಟು ತಿಂದರೂ ತನ್ನ ನಿಯತ್ತು ಬದಲಿಸುವಂತಿಲ್ಲ..
ಪ್ರೀತಿ ಕೇವಲ ಲಾಯದೊಳಕ್ಕೆ ಕಟ್ಟಿದಮೇಲೆ..
ಗೆದ್ದಾಗ ಹಣೆ ನೇವರಿಸುವುದು..
ಗೆಲ್ಲುವ ಮೊದಲು ಗೆಲ್ಲಲು ಮನವೊಲಿಸುವುದು...
ತನ್ನ ಲಕ್ಷ್ಯ ಬಿಟ್ಟು ಬೇರೆಡೆಗೆ ಹೊರಳುವಂತಿಲ್ಲ...
ಹೊರಳಿದರೂ ಏನು ಕಾಣದು ಆಟ ಕಟ್ಟಿದ ಗೋಡೆ ಅಡ್ಡವಾಗುತ್ತದೆ..!
ಮೇಲಿನಿಂದ ಮಹಾ ಅನುಮಾನ ಪಿಶಾಚಿ..
ಎಲ್ಲಿ ತನ್ನಿಂದ ದೂರಾಗುತ್ತಾಳೋ...ಎಂದು ಎಕ್ಸ್ಟ್ರಾ  ಕೇರ್..!!

ಅದಾಗಿ ಎರಡು ತಿಂಗಳುಗಳೇ ಕಳೆದಿವೆ,
ಆದರೆ ಆ ಸಿಹಿ ಚು೦ಬನ, ಆ ನಗು, ಅಳು, ಹೇಯ್ love u ಅಂತ ಹೇಳಿ ಬಂದು ಅಪ್ಪಿಹಾಕಿಕೊಲ್ಲುತ್ತಿದ್ದ ಅವಳ ನೆನಪು ನನ್ನ ಬಿಟ್ಟು ಹೋಗಿಲ್ಲ.
ರಾತ್ರಿಯಾದರೆ ಸಾಕು ನಿದ್ದೆ ಹತ್ತುವುದಿಲ್ಲ,
ನನ್ನ ನಿನ್ನೆಗಳ ಅವಳ ನೆನಪು ಮಾಸಲು ಇನ್ನೆಷ್ಟು ನಾಳೆಗಳು ಬೇಕೋ ನಾನರಿಯೆ.
ನನ್ನ ಅಳುವಿನ ಅ೦ಕಿತವ ತೊಡೆದವಳು ಅವಳು,
ಬಿರಿ ಬಿರಿದ ವಡಲು ಬರಿದಾದ ಮಡಿಲಿಗೆ ನೆಮ್ಮದಿಯ ಶರತ್ಕಾಲವಾಗಿ ಬ೦ದವಲು ಅವಳು.
ಅವಳು ನಗೆಯಾದರೆ ನಾನು ತುಟಿಯಂಚಿನ ಬೆಳಕಾಗುವೆ,
ಹಾಡಾದರೆ ಭಾವವಾಗುವೆ,
ಜನ್ಮವಾದರೆ ಜನ್ಮದಾಚೆಗೂ ನಾ ಜೊತೆಗಿರುವೆ.
ಈ ಹುಡುಕಾಟದಲ್ಲಿ ನಾನು ಸ೦ಪಾದಿಸಿದ್ದು ಶೂನ್ಯ ಎಲ್ಲಿಯೂ ನಾನು ನನ್ನ ಸ್ವಾರ್ಥ ತೋರಲಿಲ್ಲ.
ಪ್ರೀತಿಯ ವಿನ ಏನನ್ನು ಬೇಡಲಿಲ್ಲ.
ಎಲ್ಲವನ್ನೂ ಸಮರ್ಪಿಸಲು ಸಿದ್ದನಿದ್ದೆ.
ಆದರೆ ಅವಳಿಗಿಂತ ಸಿಹಿ ಮುತ್ತು ನೀಡಿದವಳು ನನ್ನ ಮನದನ್ನೆಯಾಗಿಹಳು.
ಅವಳೇ ನನಗೆ ಕಡೆತನಕ.
ಅವಳ ಕಣ್ಣನ್ನ ನೋಡ್ತಾ ಇದ್ರೆ ಯಾಕೋ ಗೊತ್ತಿಲ್ಲ ನನ್ನ ಕಣ್ಣು ತೇವ ಆಗ್ತಾ ಇತ್ತು,
ಈಗ ಅವಳ ನೆನಪಾದಾಗ ಆಗ್ತಾ ಇದ್ಯಲ್ಲ ಹಾಗೆ. ಅದೆಷ್ಟೋ ರಾತ್ರಿಯನ್ನ ಹಗಲು ಮಾಡಿದ್ವಿ ಒಟ್ಟಿಗೆ ಕೂತು. ಈಗಲೂ ಮಾಡ್ತಾ ಇದೀನಿ ಆದ್ರೆ ಅವಳು ಜೊತೆ ಇರಲ್ಲ.
ಅವಳ ನೆನಪು ಮಾತ್ರ ಇರತ್ತೆ. ನಡೆಯುವ ಪ್ರತಿ ಹೆಜ್ಜೆಯಲೂ ನೆನಪುಗಳು ಮುತ್ತಿಕೊಳತ್ತೆ.
ಬೇಡ ಅಂದರೂ ಕೊಳೆತ ನಿನ್ನೆಗಳು ಇಂದು, ನಾಳೆಗಳನ್ನು ಕಾಡತ್ತೆ.
ಅವಳೇ ಹಾಗೆ. ಅವಳೆಂದರೆ ಶರತನ ಅಹಂ ಅಡಗಿ ಬಾಲ ಮುದುರಿದ ಹೆಣ್ಣು ನಾಯಿಯ ತರ ಆಗಿ ಹೋಗತ್ತೆ. ಶಿಶಿರ  ಅಂದ್ರೆ ಕಾಲೇಜಿನ ಪ್ರಾಂಶುಪಾಲರು ಕೂರಿಸಿ ಮಾತಾಡಿಸ್ತಾರೆ ಆದ್ರೆ ಅವಳು ಮಾತ್ರ ನನಗೆ ಅವಾಜ್ ಹಾಕೋದು "ಹೇಯ್ ಮುಚ್ಕೊಂಡಿರೋ ಗೊತ್ತು" ಹೀಗೆ ಹೇಳಿದ ಮರು ಕ್ಷಣವೇ ನನಗೂ ನಗೂ ಅವಳಿಗೂ ನಗು, "ಕ್ಯೂಟು ಬೇಬಿ" "ಸ್ವೀಟು" "ಕಂದ" ಆದರೆ ಇನ್ನೆಲ್ಲಿಯ ಕಂದ ಆಗಲೇ ಈ ಕಂದನ ನಿದ್ರೆ ಕಸಿದುಕೊ೦ಡು ನನ್ನ ನೆನಪನ್ನೂ ಮಾಡಿಕೊಳ್ಳದೆ ನನ್ನ ಕಂದ ಆರಾಮಾಗಿ ಜೀವನ ಸಾಗಿಸುತ್ತಿದ್ದಾಳೆ.
ಅವಳಿಗೆ ನಾನು ಬರಿ ಕನಸು, ಆದರೆ ನನಗೆ ಅವಳು ನೆನಪು,
ಕನಸು, ನಿನ್ನೆ, ನಾಳೆ, ಎಲ್ಲವೂ ಅವಳೇ...
ಧೂಮಪಾನ ಮಾಡಿ ಸಿಕ್ಕಿ ಹಾಕಿಕೊ೦ಡಾಗಲು, ಅಮ್ಮ ಅಪ್ಪ ಅಕ್ಕ ನೆಂಟರು ಎಲ್ಲರೂ ಬೈದಾಗಳೂ ಇಷ್ಟು ಅತ್ತಿರದಿದ್ದ ಶಿಶಿರ  ಇವಳಿಗೋಸ್ಕರ ದಿನವಿಡೀ ಅಳುತ್ತಾನೆ ಎಂದರೆ ನೀವೇ ಲೆಕ್ಕಹಾಕಿಕೊಳ್ಳಿ.
ಅವಳ ನೆನಪು ಆಗ್ತಾ ಇದ್ರೆ ಯಾವುದೋ ಒಂದು ಕವನ ಗೀಚಿದ ಅನುಭವ ಆಗತ್ತೆ.
"ಮೇಘಗಳ ಸಾಲಿನಲ್ಲಿ ಭಾಸ್ಕರನ ಒಂಟಿಪಯಣ"..... ಹೌದು ಈಗ  ನಾನು ಒಂಟಿಯೇ.
"ನೀರೆಲೆಯ ನಾದದಲ್ಲಿ ಶಿಶಿರನ ಶೋಕಕಥನ" ಜಾರುತಿದೆ ಹಸ್ತದ ಬೆಸುಗೆ ಸರಿಯುತಿದೆ ಅಪ್ಪುಗೆ ಸಲಿಗೆ............."
ಸರಿದು ಯಾವ ಕಾಲವಾಯಿತೋ. ದರಿದ್ರದ ನೆನಪಿನ ಶಕ್ತಿ ದಿನಾಂಕ ಮರೆತುಹೊಗತ್ತೆ.
"ಕೊರಗುತಿರೋ ಹೃದಯದ ಕರೆಗೆ, ಕಣ್ಣೀರ ಕೊಡುಗೆಯ ಕ್ಷಣಕೆ, ಬರೆದುದೆಲ್ಲವೂ ಕವಿತೆ.........."
ಹೌದು ಕಣ್ಣೀರು ಎಂತವನನ್ನೂ ಕವಿಯಾಗಿಸುತ್ತದೆ, ಗೀಚುವ ಶಕ್ತಿ ಒದಗಿಸುತ್ತದೆ.
"ನ೦ಬಿಕೆಯ ಆಸರೆಯಲ್ಲೇ ಮೋಸದ ಕತ್ತಲೆ ಕದನ,ಸಂತಸದ ಬಾಳ ಪುಟದೀ ಒಲುಮೆಯ ಪದಗಳ ಹರಣ........"
ನಂಬಿದ್ದೆ ಇವಳೇ ನನ್ನ ಬಾಳ ಸಂಗಾತಿ ಆಗುತ್ತಾಳೆ. ನನ್ನ ನಾಳೆಗಳಲ್ಲಿ ಜೊತೆ ಇರುತ್ತಾಳೆ ಎಂದು.
ಆದರೆ ಸಿಕ್ಕಿದ್ದು .......!
ನೆನಪೆಂಬ ಚೂರಿಯ ಇರಿತ, ದೂರಾದ ಗೆಳತಿಯ ಸನಿಹ....!!!
ನನ್ನ ಪಾಲಿಗೆ ದೊರಕಿದ್ದು.
"ಸುರಿಸುತಿದೆ ನೋವಿನ ಮಳೆಯ, ಸಾಗದೆ ನಿಂತಿಹ ಸಮಯ,ನರಳುತಿಹ ಬರಹವೀ ಕವಿತೆ.......!
ನರಳ್ತಾ ಇರೋದು ನನ್ನ ಬರಹ ಅಲ್ಲ. ಅದು ಇನ್ನೂ ಹೆಚ್ಚಿನ ತಾಕತ್ತನ ಇತ್ತೀಚಿನ ದಿನಗಳಲ್ಲಿ ಪಡೆದಿದೆ.
ಆದರೆ ನಲುಗ್ತಾ ಇರೋದು ನನ್ನ ಮನಸು...!
"ನಲಿವುಗಳ ಬಂಧನದಲ್ಲೇ ಮರುಗುತಿದೆ ಮೌನದ ಮನನ, ಕಳೆಯುತಿರೋದಿನಗಳ ಹಿಂದೆ ಕೊಲೆಯಾದ ಕನಸಿನ ಮರ್ಮ.........!!
ಏನು ಹೇಳೊಕಾಗ್ತಿಲ್ಲ ಈ ಸಾಲಿಗೆ ನೀವು ನನಗಿಂತ ಬುದ್ದಿವಂತರು ಅರ್ಥ ಮಾಡ್ಕೊಳ್ತೀರಿ ನನ್ನ ನೋವನ್ನ ಅನ್ಕೊಂಡಿದೀನಿ.
"ಹರಟುತಿರೋ ಮನಸಿನ ನಡುವೆ ಮರೆಯಾದ ಮಾತಿನ ಭವನ, ಅವಳನ್ನು ಸೇರದೆ ಕರಗಿ ನೀರಾಗಿ ನಿಂತಿದೆ ಬದುಕು. ದುರಂತದ ಸಾಲುಗಳೇ ಈ ಕವಿತೆ.......!
ಆದ್ರೆ ಇದುಸತ್ಯ. ವಿಧಿಬರಹ ಎಂತ ಘೋರ ಪ್ರೇಮಿಗಳು ದೂರ ದೂರ ಹಸಿರಾಗೋ ಪ್ರೇಮ ಕಥೆಗೆ ಉಸಿರಾಗೋ ಜಗವು ದೂರ..!!
ಈ ಹಾಡು ನನಗಾಗಿಯೇ ಬರೆದಂತೆ ಭಾಸವಾಗುತ್ತಿದೆ..
ಕಾಯುವೆ ತೊಟ್ಟು ಮಳೆಗಾಗಿ ಕಾದು ನಿಲ್ಲುವ ರೈತನ ಹಾಗೆ. ಮಕರ೦ದಕ್ಕಾಗಿ ಶರತ್ ಕಾಲದವರೆಗೂ ಕಾಯುವ ಮರಿ ದು೦ಬಿಯ ಹಾಗೆ, ಕೆಲಸಕ್ಕೆ ಕಾಯುವ ನಿರುದ್ಯೋಗಿಯ ಹಾಗೆ. ನೋವಿನ ಅ೦ಕಿತವ ತೊಡೆದುಹಾಕಿ ಒಲವಿನ ರಕ್ಷೆಯ ನೀಡಿ ಈಗ ನೋವಿನ ದಳ್ಳುರಿಗೆ ತಳ್ಳಿರುವ ನೀನೆ ನನಗೆ ಕಡೆ ತನಕ. ಕಾಯುವೆ ಉಸಿರಿರುವತನಕ...
 
ಮೊದಲು  ಭಾರತೀಯ ಜನತಾಪಕ್ಷದ ಹಳೆ ಅಧ್ಯಕ್ಷರ ಹಾಗೆ ಮುಗುಳ್ನಕ್ಕೆ 
ನಂತರ ಕಾಂಗ್ರೆಸ್ಸ್ ಅಧ್ಯಕ್ಷೆ ಯಂತೆ ಕೈ ಆಡಿಸಿದೆ..
ನನ್ನ ಪ್ರೀತಿ ನಿನಗೆ ಜನತಾದಳದ  ಹೊರೆಯಾಗುವುದು ಬೇಡ........!

-------------------------------------------------------------------------------------------------------------------------
ಚಂದ್ರನ ತಂಪು ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ವ್ಯತ್ಯಾಸ ವಾಗುವುದಿಲ್ಲ..   ವ್ಯತ್ಯಾಸವಾಗುವುದು ಬೆಳದಿಂಗಳು ಮಾತ್ರ...!!!
                                                                               With Love-
                                                Lover